S
Featured Quote santhosh kumar 2024-03-30T03:31:10+0000
Quote by santhosh kumar - "ಬದುಕಿನ ಹೋರಾಟದಲ್ಲಿ
ಜವಬ್ದಾರಿ ಇಲ್ಲದವ ಜೀವಂತ ಶವ
ಎಂದು ಸಾರುವ ಯುವ"

ದೊಡ್ಮನೆಯವರ ಸಿನಿಮಾ ಅಲ್ವಾ ಹೇಗಿದ್ರು 
ಅಭಿಮಾನಿಗಳು ನೋಡ್ತಾರೆ ಅನ್ನೋ ನೊಂದ 
ಜೀವಗಳಿಗೆ ಯುವ ಸಿನಿಮಾ ಅರ್ಪಣೆ.

80 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ 
ಒಂದು ಕುಟುಂಬ ನಿರಂತರ ಸೇವೆ ಸಲ್ಲಿಸುತ್ತಿದೆ 
ಅಂದರೆ ಅದಕ್ಕೆ ಮುಖ್ಯ ಕಾರಣ ಶ್ರಮ, ಶ್ರದ್ಧೆ, 
ನಂಬಿಕೆ, ವಿಶ್ವಾಸ, ಇವೆಲ್ಲವನ್ನು ನೋಡಿ 
ಆಶೀರ್ವಾದಿಸುವ ಅಭಿಮಾನಿಗಳ ಕೃಪಕಟಾಕ್ಷ.

ಈ ಮುನ್ನುಡಿಯನ್ನು ಯಾಕೆ ಕೊಡ್ತ ಇದಿನಿ ಅಂದ್ರೆ
ಭರವಸೆಯೊಂದು ದೊಡ್ಡ ಬೆಳಕಾಗಿ ಪ್ರಜ್ವಲಿಸಿದಾಗ 
ನಮಗೆ ವಾರಸುದಾರರು ಸಿಕ್ಕಿದರು ಅನ್ನೊ ಖುಷಿಗಿಂತ 
ಕನ್ನಡ ಸಿನಿಮಾ ರಂಗಕ್ಕೆ ಮತ್ತೊಬ್ಬ ಸಕಲಕಲವಲ್ಲಭನ
ಆಗಮನ ಅನ್ನೋದೆ ನಮ್ಮ ಹೆಮ್ಮೆಯ ಸಂಗತಿ.

ನೆಪೊಟಿಸಿಂ, ಕುಟುಂಬದ ಹಿನ್ನಲೆ, 
ದೊಡ್ಡ ಅಭಿಮಾನಿ ಬಳಗ, ಸ್ಟಾರ್ ವಾರ್ 
ಇದನ್ನೆಲ್ಲಾ ಬದಿಗೊತ್ತಿ "ಯುವ" ಸಿನಿಮಾವನ್ನು 
ನೋಡಿ ಒಬ್ಬ ನಾಯಕ ನಟ ಹೇಗೆ ಸಿನಿಮಾಗೆ 
ಶ್ರಮವಹಿಸಿ ಬಂದಿದ್ದಾರೆ ಮತ್ತು ನಟಿಸಿದ್ದಾರೆ 
ಅನ್ನೋದು ನಿಮ್ಮ ಕಣ್ಣುಗಳಿಗೆ ಭಾಷವಾಗುತ್ತೆ.

"ಯುವ" ಸಿನಿಮಾದ ಬಗ್ಗೆ ನಾನು ಹೆಚ್ಚಾಗಿ 
ಏನು ಹೇಳೊದಿಲ್ಲ. ಆದರೆ ಒಂದಂತು ಸತ್ಯ,
"ಯುವ" ಸಿನಿಮಾವು ಕುಟುಂಬ ಸಮೇತ ನೋಡುವ 
ಒಂದು ಅದ್ಬುತವಾದ ಸಿನಿಮಾ. ಕೊನೆಯ 30 ನಿಮಿಷದ
ದೃಶ್ಯಾವಳಿಗಳು ನಿಮ್ಮ ಹೃದಯವನ್ನು ಭಾರವಾಗಿಸಿ 
ನಿಮ್ಮ ಕಣ್ಣಗಳಲ್ಲಿ ನೀರನ್ನು ತರಿಸುತ್ತೆದೆ.

-"ಯುವ" ನಿಮ್ಮವ
ಕನ್ನಡದವ 
ಕನ್ನಡಿಗರ ಹೆಮ್ಮೆ ಇವ"-

       ಸಂತೋಷ್ ಸರಸು ಹಂಗಳ🖊️ - Made using Quotes Creator App, Post Maker App